ಗಲ್ಲುಗಂಬದ ಆತಂಕದಲ್ಲಿ

126.00

ಶಿಕ್ಷೆಯನ್ನು ಎದುರಿಸುತ್ತಿರುವ ಕೈದಿಗಳ ಮಾನಸಿಕ ಸ್ಥಿತಿಯೇನು? ನ್ಯಾಯಾಲಯವು ತಮಗೆ ಕೊಟ್ಟ ಶಿಕ್ಷೆಯ ಬಗ್ಗೆ ಅವರ ಅಭಿಪ್ರಾಯಗಳೇನು? ಅವರು ಈ ಶಿಕ್ಷೆಯು ಸಮರ್ಪಕವೆಂದು ಒಪ್ಪಿಕೊಳ್ಳುವರೇ ಇಲ್ಲವೇ ತಾವು ತಪ್ಪನ್ನೇ ಮಾಡಿಲ್ಲ, ತಮಗೆ ವಿನಾಕಾರಣ ಶಿಕ್ಷೆಯಾಗಿದೆ ಎಂದು ಹೇಳುತ್ತಾರೆಯೇ? ಇಂತಹ ಕೈದಿಗಳು ತಮಗೆ ಘೋರ ರೂಪದ ಶಿಕ್ಷೆಯಾಗಿದೆ ಎಂದು ಖಿನ್ನತೆಯಿಂದ ಕೊರಗುತ್ತಿದ್ದಾರೆಯೇ? ಈ ಶಿಕ್ಷೆಯ ಕಾರಣವಾಗಿ ದೈಹಿಕವಾಗಿ ಅವರಿಗೆ ಕಾಯಿಲೆಗಳು ಬಂದಿವೆಯೇ? ಎನ್ನುವುದನ್ನು ನಿರೂಪಿಸಿದ್ದೇನೆ.

ಈ ಕೃತಿಯಲ್ಲಿ ಏಳು ಕಥೆಗಳಿವೆ. ಈ ಕಥೆಗಳಲ್ಲಿ ಬರುವ ಅಷ್ಟೂ ಕೈದಿಗಳನ್ನೂ ನಾನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರ ಕಥೆಗಳನ್ನು ಪೊಲೀಸ್ಅಧಿಕಾರಿಗಳ ಸಂದರ್ಶನಗಳು ಮತ್ತು ನ್ಯಾಯಾಲಯದ ಕಡತಗಳ ಮೂಲಕ ಸಂಗ್ರಹಿಸಿರುವೆ. ಹೀಗಾಗಿ ಈ ಕೃತಿಯಲ್ಲಿರುವ ಕಥೆಗಳು ಮೊದಲ ಕೃತಿಯಲ್ಲಿರುವ ಕಥೆಗಳಿಗಿಂತ ಭಿನ್ನವಾಗಿದೆ. ಈ ಕೃತಿಯಲ್ಲಿ ನಾನು ಭಾರತದ ಅಪರಾಧ ಚರಿತ್ರೆಯಲ್ಲಿ ಅತ್ಯಂತ ಹೀನ ಮತ್ತು ಭಯಂಕರವೆಂದು ಭಾವಿಸಲಾಗಿರುವ ಅಪರಾಧಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದ್ದೇನೆ.

Additional information

Author

D.V.Guruprasad

Language

Kannada

Category

Short Stories

Reviews

There are no reviews yet.

Only logged in customers who have purchased this product may leave a review.